ಸೋಲು

ನೆಲಮುಗಿಲಿನೆತ್ತರಕು ನಿಂತಿದೆ ಭೂತ
ಕಂಡ ನೆತ್ತರು ಕೆಂಡದ ಮೇಲೆ ಕುದಿಯುತಿದೆ
ತನ್ನ ಬಾಲವನ್ನೇ ತಿನ್ನುತ್ತಾ ಸುರುಳಿಸುತ್ತಿಕೊಂಡಂತೆ ಆಗಿದೆ
ಪಂಜರದಿಂದ ಹೊರಬಂದ ಪಕ್ಷಿ
ಹಾರಲಾರದೆ ಹೊಯ್ದಾಡಿದಂತೆ ಸೋತಿದೆ
ನಂದನವನದಲ್ಲಿ ಕಣ್ಣೀರ ಹೊಳೆ
ಹೊದರಲ್ಲಡಗಿ ಹರಿಯುತ್ತದೆ ಗಳಗಳ
ಕೃಷ್ಣನ ಕೊಳಲಲ್ಲಿ ಕಂಸನುಸಿರು ಬಿಡುತ್ತಿದ್ದಾನೆ
ಹುಡುಕುತ್ತಿದ್ದ ಬಳ್ಳಿ ಕಾಲ್ತೊಡಕಿದಾಗ
ಹರಕೊಂಡು ತಿಂದರೆ
ಬಾಯೆಲ್ಲ ವಿಷವಾಯ್ತು
ಕಾವೇರಿಗೆ ಕಟ್ಟಿದಾಣೆಕಟ್ಟು
ಕಟ್ಟುವ ಮುನ್ನವೇ
ವಿಶ್ವೇಶ್ಚರಯ್ಯನಣಕಿಸಿ
ಹೊಲಹಳ್ಳಿಗಳಲ್ಲೆಲ್ಲ ನುಗ್ಗಿತು
ಸಮುದ್ರಕ್ಕೆ ನೀರು ಕುಡಿಯಲು ಬಿಟ್ಟಂತೆ
ಭಕ್ಷ್ಯ ರಾಶಿಯ ಬಾಚಿ ತಬ್ಬಿ ಉಪವಾಸ ನರಳಿದಂತೆ
ಪಟ್ಟೆ ಪೀತಾಂಬರದ ಮೇಲೆ ಬೆತ್ತಲೆ ಹೊರಳಾಡಿದಂತೆ
ತನ್ನರಮನೆಯಂಗಳದಲ್ಲಿ ನಿಂತು ತಾ ತಿರಿದುಂಡಂತೆ
ಚಿಕ್ಕೆಗಳನೆಣಿಸಲು ಕೋತಿ
ಮರದಿಂದ ಕೆಳಬಿದ್ದು ಹಲ್ಲುಕಿರಿದಂತೆ
ತೆಕ್ಕೆಗೆ ಅಮರದ ಬೊಡ್ಡೆ ಹಿಡಿದೇರಿ
ಬಾಯ್ತೆರೆದು ಬಿದ್ದಾಗ
ಯಾರಾದರೂ ನೋಡಿದರೇನೋ
ಎಂದು ಸುತ್ತ ನೋಡುವ ದುಸ್ಥಿತಿ
(೨೭-೧೨-೭೬)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖಾಲಿ ಶೀಷೆ
Next post ಶಿಸ್ತಿನ ಸಿಪಾಯಿ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys